ರಿವೈಸಿಂಗ್ ಕಮಿಟಿಗೆ `ಕಾಂಚನ`
Posted date: 16 Thu, Jul 2015 – 08:38:17 AM

 ಅಮರ್‌ಚಂದ್ ಜೈನ್ ಅರ್ಪಿಸುವ, ಓಂಶಾಂತಿವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕಾಂಚನ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರದಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ತೆಗೆದು ಹಾಕುವಂತೆ ಹೇಳಿದೆ. ಇದಕ್ಕೊಪ್ಪದ ಚಿತ್ರತಂಡ ರಿವೈಸಿಂಗ್ ಕಮಿಟಿ ಮೊರೆ ಹೋಗಿದೆ.
   ಚಿತ್ರದ ನಿರ್ಮಾಪಕರಾಗಿರುವ ವಿಜಯ್ ಸುರಾನ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ.  ಚಿತ್ರದ  ಎರಡು ಹಾಡುಗಳನ್ನು ಶೇಷಗಿರಿ ಹಾಗೂ ಸಂತೋಷ್ ಬರೆದಿದ್ದಾರೆ. ಎಂ.ಎಸ್.ಮಾರುತಿ ಸಂಗೀತ ನೀಡಿದ್ದಾರೆ. ಶಂಕರ್ ಛಾಯಾಗ್ರಹಣ, ಜೀವನ್ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ರಾಹುಲ್(ಹೊಸ ಪರಿಚಯ), ರೂಪನಟರಾಜ್, ಹೇಮಂತ್, ಹನುಮಂತೇಗೌಡ, ವಿಜಯ್‌ಚಂಡೂರ್, ಗೀತಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed